<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Showcase | Alva's Education Trust</title>
	<atom:link href="https://alvas.org/category/showcase/feed/" rel="self" type="application/rss+xml" />
	<link>https://alvas.org</link>
	<description>Just another WordPress site</description>
	<lastBuildDate>Tue, 31 Dec 2019 15:25:13 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.9.4</generator>
	<item>
		<title>ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಮೂಡುಬಿದಿರೆ ಸಜ್ಜು</title>
		<link>https://alvas.org/news-events/%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b2%ae%e0%b2%9f%e0%b3%8d%e0%b2%9f%e0%b2%a6-%e0%b2%95%e0%b3%8d%e0%b2%b0%e0%b3%80%e0%b2%a1%e0%b2%be%e0%b2%95%e0%b3%82%e0%b2%9f%e0%b2%95/</link>
		
		<dc:creator><![CDATA[alvas]]></dc:creator>
		<pubDate>Tue, 31 Dec 2019 15:21:51 +0000</pubDate>
				<category><![CDATA[News & Events]]></category>
		<category><![CDATA[Showcase]]></category>
		<guid isPermaLink="false">http://alvas.org/?p=2314</guid>

					<description><![CDATA[<p>ಮೂಡುಬಿದಿರೆ: ಒಲಪಿಂಕ್ಸ್‍ನಂಥ ವಿಶ್ವಮಟ್ಟದ ವೇದಿಕೆಯಲ್ಲಿ ಭಾರತದ ಪತಾಕೆ ಹಾರಿಸುವ ರಾಷ್ರ್ಟದ ಭವಿಷ್ಯದ ಕ್ರೀಡಾಪಟುಗಳ ಸಾಧನೆಗೆ ಸಾಕ್ಷಿಯಾಗಲು ವಿದ್ಯಾಕಾಶಿ ಮೂಡುಬಿದಿರೆ ಸಜ್ಜುಗೊಂಡಿದೆ.</p>
The post <a href="https://alvas.org/news-events/%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b2%ae%e0%b2%9f%e0%b3%8d%e0%b2%9f%e0%b2%a6-%e0%b2%95%e0%b3%8d%e0%b2%b0%e0%b3%80%e0%b2%a1%e0%b2%be%e0%b2%95%e0%b3%82%e0%b2%9f%e0%b2%95/">ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಮೂಡುಬಿದಿರೆ ಸಜ್ಜು</a> first appeared on <a href="https://alvas.org">Alva's Education Trust</a>.]]></description>
										<content:encoded><![CDATA[<p style="text-align: justify;">• 80ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ಗೆ ದಿನಗಣನೆ<br />
• ದೇಶದ ಕ್ರೀಡಾಪಟುಗಳು ಸಾಧನೆಗೆ ಸಾಕ್ಷಿಯಾಗಲಿಗೆ ಬೆದ್ರ</p>
<p style="text-align: justify;">ಮೂಡುಬಿದಿರೆ: ಒಲಪಿಂಕ್ಸ್‍ನಂಥ ವಿಶ್ವಮಟ್ಟದ ವೇದಿಕೆಯಲ್ಲಿ ಭಾರತದ ಪತಾಕೆ ಹಾರಿಸುವ ರಾಷ್ರ್ಟದ ಭವಿಷ್ಯದ ಕ್ರೀಡಾಪಟುಗಳ ಸಾಧನೆಗೆ ಸಾಕ್ಷಿಯಾಗಲು ವಿದ್ಯಾಕಾಶಿ ಮೂಡುಬಿದಿರೆ ಸಜ್ಜುಗೊಂಡಿದೆ.</p>
<p style="text-align: justify;">ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಹಾಗೂ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ಮೂಡುಬಿದಿರೆಯ ಸ್ವರಾಜ್ ಮೈದಾನದಲ್ಲಿ ಜ.2ರಿಂದ(ನಾಳೆ) 6ರವರೆಗೆ ನಡೆಯಲಿರುವ 80ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ಗೆ ದಿನಗಣನೆ ಆರಂಭಗೊಂಡಿದ್ದು, ತಯಾರಿ ಕೊನೇ ಹಂತದಲ್ಲಿದೆ.</p>
<p style="text-align: justify;"><strong>ದಾಖಲೆಯ ಕ್ರೀಡಾಪಟುಗಳು ಭಾಗಿ:</strong><br />
ಈ ಬಾರಿಯ ಕ್ರೀಡಾಕೂಟದಲ್ಲಿ ರಾಷ್ಟ್ರದ 400 ವಿಶ್ವವಿದ್ಯಾಲಯಗಳ ಸುಮಾರು 5 ಸಾವಿರ ಅಥ್ಲೀಟ್‍ಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಇದು ಕ್ರೀಡಾಕೂಟದ ಇತಿಹಾಸದಲ್ಲೇ ದಾಖಲೆಯಾಗಲಿದೆ. ಜೊತೆಗೆ ಸುಮಾರು 2000 ಕ್ರೀಡಾಧಿಕಾರಿಗಳು ಭಾಗವಹಿಸಲಿದ್ದು, ರಾಷ್ಟ್ರದ ಖ್ಯಾತ ಕ್ರೀಡಾಪಟುಗಳನ್ನು ಹಾಗೂ ತರಬೇತುದಾರರನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ. ಈಗಾಗಲೇ 27 ವಿವಿಯಿಂದ ಕ್ರೀಡಾಪಟುಗಳು ಮೂಡುಬಿದಿರೆಗೆ ಆಗಮಿಸಿದ್ದಾರೆ.</p>
<p style="text-align: justify;"><strong>ಸಜ್ಜುಗೊಳ್ಳುತ್ತಿದೆ ಸ್ವರಾಜ್ ಮೈದಾನ:</strong><br />
ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಮೂಡುಬಿದಿರೆಯ ಸ್ವರಾಜ್ ಮೈದಾನ ಸಜ್ಜುಗೊಳ್ಳುತ್ತಿದ್ದು, ಹೊನಲು ಬೆಳಕಿನ ಕ್ರೀಡಾಕೂಟವಾಗಿರುವುದರಿಂದ ಮೈದಾನದಲ್ಲಿ ಫ್ಲಡ್‍ಲೈಟ್ ವ್ಯವಸ್ಥೆ ಮಾಡಲಾಗಿದೆ. 400 ಮೀ. ಓಟದ ಟ್ರ್ಯಾಕ್‍ಗೂ ಹೊಸ ಟಚ್ ನೀಡಲಾಗಿದ್ದು, ಅತ್ಯಾಧುನಿಕ ಫೋಟೋ ಫಿನಿಶಿಂಗ್ ತಂತ್ರಜ್ಞಾನದ ವ್ಯವಸ್ಥೆಯನ್ನು ಮಾಡಲಾಗಿದೆ.</p>
<p><strong>ಮೂರು ತಿಂಗಳ ತಯಾರಿ</strong><br />
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ನಾಲ್ಕನೇ ಬಾರಿ ರಾಷ್ಟ್ರಮಟ್ಟದ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಕ್ರೀಡಾಕೂಟವನ್ನು ಆಯೋಜಿಸುತ್ತಿದ್ದು, ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವರ ನೇತೃತ್ವದಲ್ಲಿ ಮೂರು ತಿಂಗಳಿಗಿಂತಲೂ ಹಿಂದಿನಿಂದ ತಯಾರಿ ನಡೆಯುತ್ತಿದೆ. ಇದಕ್ಕಾಗಿ ಆಹಾರ, ಸಾರಿಗೆ, ತಾಂತ್ರಿಕ, ಬಹುಮಾನ ವಿತರಣೆ, ದಾಖಲೀಕರಣ ಸೇರಿದಂತೆ ಸುಮಾರು 20 ಸಮಿತಿಗಳು ಕಾರ್ಯ ನಿರ್ವಹಿಸುತ್ತಿವೆ.</p>
<p><strong>ಉಚಿತ ಸೌಲಭ್ಯ</strong><br />
ಕ್ರೀಡಾಕೂಟಕ್ಕೆ ಆಗಮಿಸುವ ಎಲ್ಲ ಸ್ಪರ್ಧಿಗಳು, ತರಬೇತುದಾರರು, ಕ್ರೀಡಾಧಿಕಾರಿಗಳು ಹಾಗೂ ವಿಶೇಷ ಆಹ್ವಾನಿತರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಉಚಿತ ಊಟ ಹಾಗೂ ವಸತಿ ಸೌಲಭ್ಯ ಒದಗಿಸಲಾಗುತ್ತಿದೆ. ಕ್ರೀಡಾ ಪಟುಗಳಿಗೆ ಉಳಿದುಕೊಳ್ಳಲು ಸುಮಾರು 25 ವಸತಿ ಗೃಹಗಳ ವ್ಯವಸ್ಥೆ ಮಾಡಲಾಗಿದೆ. ಬೆಳಗಿನ ಜಾವದಲ್ಲಿ ಅಭ್ಯಾಸ ಮಾಡಲು ವಿದ್ಯಾರ್ಥಿಗಳೀಗೆ ಜಿಮ್ ಸೌಕರ್ಯ ನೀಡಲಾಗಿದೆ. ಉತ್ತರ ಹಾಗೂ ದಕ್ಷಿಣ ಭಾರತ ಎರಡೂ ಶೈಲಿಯ ಊಟದ ವ್ಯವಸ್ಥೆ ಮಾಡಲಾಗಿದೆ.</p>
<p style="text-align: justify;"><strong>ಕ್ರೀಡಾಕೂಟಕ್ಕೆ ಸಾಂಸ್ಕೃತಿಕ ಮೆರಗು</strong><br />
ದೇಶದ ನಾನಾ ಭಾಗಗಳಿಂದ ಆಗಮಿಸುವ ಕ್ರೀಡಾಪಟುಗಳಿಗೆ ದೇಶದ ವೈವಿಧ್ಯ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ ಕ್ರೀಡಾಕೂಟದ ಉದ್ಘಾಟನೆಗೂ ಮುನ್ನ ಸಾಂಸ್ಕøತಿಕ ಮೆರವಣಿಗೆ ಇರಲಿದೆ. ನಾಳೆ ಮಧ್ಯಾಹ್ನ 2 ಗಂಟೆಗೆ ಮೂಡುಬಿದಿರೆಯ ಹನುಮಾನ್ ದೇವಸ್ಥಾನದಿಂದ ಹೊರಡುವ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಆಳ್ವಾಸ್ ಕಾಲೇಜಿನ ಸುಮಾರು 2000 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಮೆರವಣಿಗೆಯಲ್ಲಿ ಕೊಡಗು, ಇಳಕಲ್, ಗುಜರಾತ್, ರಾಜಸ್ಥಾನ್, ಪಂಜಾಬ್, ಲಾವಣಿ, ಕಾಶ್ಮೀರಿ, ಉತ್ತರಭಾರತ, ಈಜಿಪ್ಟ್, ಶ್ರೀಲಂಕಾ ಜೋಕರ್ ಚೈನೀಸ್, ಹಾಗೂ ಮೈಸೂರ್ ಶೈಲಿಯ ಉಡುಗೆ ಹಾಗೂ ಭಾರತದ ಸೈನ್ಯವನ್ನು ಪ್ರತಿನಿಧಿಸುವ ತೊಡಲಿದ್ದಾರೆ. ವೈವಿಧ್ಯಮಯ ಕಾರ್ಟೂನ್ ಹಾಗೂ ಪ್ರಾಣಿಗಳ ಉಡುಗೆಗಳು ಇರಲಿವೆ.</p>
<p>ಒಂದು ಸುಂದರ ಲೋಕಕ್ಕೆ ಕಾಲಿಟ್ಟಂತಹ ಅನುಭವವಾಗುತ್ತಿದೆ. ಇಲ್ಲಿನ ಸಂಸ್ಕೃತಿ ಇಷ್ಟವಾಗಿದೆ. ಎಲ್ಲಾ ರೀತಿಯಿಂದಲೂ ಅಗತ್ಯ ಸೌಲಭ್ಯ ನೀಡಲಾಗುತ್ತಿದೆ.<br />
<strong>&#8211; ಆಶಿಶ್ ಕುಮಾರ್ , ಪಾಟಲಿಪುತ್ರ ಯುನಿವರ್ಸಿಟಿ, ಪಾಟ್ನ</strong></p>
<p style="text-align: justify;">ಇಲ್ಲಿ ನಾವು ಭಾಗವಹಿಸುತ್ತಿರುವುದು 2ನೇ ಬಾರಿ. ನಮಗೆ ಯಾವುದೇ ರೀತಿಯ ಕೊರತೆ ಕಾಣಿಸುತ್ತಿಲ್ಲ.<br />
<strong>-ಸುಭಾಸ್ಚಂದ್ರ , ಮಹಾತ್ಮಾಗಾಂಧೀ ಕಾಶೀ ವಿದ್ಯಾಪೀಠ, ವಾರಣಾಸಿ</strong></p>
<p>&nbsp;</p>
<figure id="attachment_2315" aria-describedby="caption-attachment-2315" style="width: 640px" class="wp-caption aligncenter"><img fetchpriority="high" decoding="async" class="size-large wp-image-2315" src="https://alvas.org/wp-content/uploads/2019/12/IMG_3273-1024x683.jpg" alt="" width="640" height="427" srcset="https://alvas.org/wp-content/uploads/2019/12/IMG_3273-1024x683.jpg 1024w, https://alvas.org/wp-content/uploads/2019/12/IMG_3273-300x200.jpg 300w, https://alvas.org/wp-content/uploads/2019/12/IMG_3273-768x512.jpg 768w" sizes="(max-width: 640px) 100vw, 640px" /><figcaption id="caption-attachment-2315" class="wp-caption-text">80ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ಗೆ ಸಜ್ಜಾಗಿರುವ ಮೂಡುಬಿದಿರೆಯ ಸ್ವರಾಜ್ ಮೈದಾನ</figcaption></figure>
<figure id="attachment_2316" aria-describedby="caption-attachment-2316" style="width: 640px" class="wp-caption aligncenter"><img decoding="async" class="size-large wp-image-2316" src="https://alvas.org/wp-content/uploads/2019/12/IMG_3279-1024x683.jpg" alt="" width="640" height="427" srcset="https://alvas.org/wp-content/uploads/2019/12/IMG_3279-1024x683.jpg 1024w, https://alvas.org/wp-content/uploads/2019/12/IMG_3279-300x200.jpg 300w, https://alvas.org/wp-content/uploads/2019/12/IMG_3279-768x512.jpg 768w" sizes="(max-width: 640px) 100vw, 640px" /><figcaption id="caption-attachment-2316" class="wp-caption-text">80ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನ ತಯಾರಿಯಲ್ಲಿ ನಿರತರಾಗಿರುವ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು</figcaption></figure>
<figure id="attachment_2317" aria-describedby="caption-attachment-2317" style="width: 640px" class="wp-caption aligncenter"><img decoding="async" class="size-large wp-image-2317" src="https://alvas.org/wp-content/uploads/2019/12/IMG_3291-1024x683.jpg" alt="" width="640" height="427" srcset="https://alvas.org/wp-content/uploads/2019/12/IMG_3291-1024x683.jpg 1024w, https://alvas.org/wp-content/uploads/2019/12/IMG_3291-300x200.jpg 300w, https://alvas.org/wp-content/uploads/2019/12/IMG_3291-768x512.jpg 768w" sizes="(max-width: 640px) 100vw, 640px" /><figcaption id="caption-attachment-2317" class="wp-caption-text">80ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ಗೆ ಭಾಗವಹಿಸಲು ಆಗಮಿಸಿರುವ ಕ್ರೀಡಾಪಟುಗಳು ತರಬೇತಿಯಲ್ಲಿ ನಿರತರಾಗಿರುವುದು.</figcaption></figure>The post <a href="https://alvas.org/news-events/%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b2%ae%e0%b2%9f%e0%b3%8d%e0%b2%9f%e0%b2%a6-%e0%b2%95%e0%b3%8d%e0%b2%b0%e0%b3%80%e0%b2%a1%e0%b2%be%e0%b2%95%e0%b3%82%e0%b2%9f%e0%b2%95/">ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಮೂಡುಬಿದಿರೆ ಸಜ್ಜು</a> first appeared on <a href="https://alvas.org">Alva's Education Trust</a>.]]></content:encoded>
					
		
		
			</item>
		<item>
		<title>ಆಳ್ವಾಸ್‍ನಲ್ಲಿ ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಕೂಟ</title>
		<link>https://alvas.org/news-events/%e0%b2%86%e0%b2%b3%e0%b3%8d%e0%b2%b5%e0%b2%be%e0%b2%b8%e0%b3%8d%e2%80%8d%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b3%80%e0%b2%af/</link>
		
		<dc:creator><![CDATA[alvas]]></dc:creator>
		<pubDate>Fri, 27 Dec 2019 13:49:14 +0000</pubDate>
				<category><![CDATA[News & Events]]></category>
		<category><![CDATA[Showcase]]></category>
		<guid isPermaLink="false">http://alvas.org/?p=2306</guid>

					<description><![CDATA[<p>ಮೂಡುಬಿದಿರೆ: ಜನವರಿ 2 ರಿಂದ 6ರವರೆಗೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ, ಅಸೊಸೀಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿಯ ಸಹಭಾಗಿತ್ವದಲ್ಲಿ 80ನೇ ಅಖಿಲ ಭಾರತ ಅಂತರ್‍ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ಶಿಫ್ ಅನ್ನು ಆಯೋಜಿಸಲಾಗಿದೆ.</p>
The post <a href="https://alvas.org/news-events/%e0%b2%86%e0%b2%b3%e0%b3%8d%e0%b2%b5%e0%b2%be%e0%b2%b8%e0%b3%8d%e2%80%8d%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b3%80%e0%b2%af/">ಆಳ್ವಾಸ್‍ನಲ್ಲಿ ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಕೂಟ</a> first appeared on <a href="https://alvas.org">Alva's Education Trust</a>.]]></description>
										<content:encoded><![CDATA[<h5 style="text-align: center;">80ನೇ ಅಖಿಲಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ಶಿಪ್ 2020</h5>
<p style="text-align: justify;">ಮೂಡುಬಿದಿರೆ: ಜನವರಿ 2 ರಿಂದ 6ರವರೆಗೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ, ಅಸೊಸೀಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿಯ ಸಹಭಾಗಿತ್ವದಲ್ಲಿ 80ನೇ ಅಖಿಲ ಭಾರತ ಅಂತರ್‍ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ಶಿಫ್ ಅನ್ನು ಆಯೋಜಿಸಲಾಗಿದೆ.</p>
<p style="text-align: justify;">ಈ ಕ್ರೀಡಾಕೂಟವು ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆಯಲಿದ್ದು, ಕ್ರೀಡಾಕೂಟದಲ್ಲಿ ದೇಶದ 400ಕ್ಕೂ ಅಧಿಕ ವಿಶ್ವವಿದ್ಯಾಲಯಗಳ ಸುಮಾರು 5000 ಅಥ್ಲೀಟ್‍ಗಳು ಹಾಗೂ 2000 ಕ್ರೀಡಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.</p>
<p style="text-align: justify;">ಕ್ರೀಡಾಕೂಟದ ವ್ಯವಸ್ಥೆಗಾಗಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ 1 ಕೋಟಿ ರೂ. ಅನುದಾನ ದೊರೆತಿದೆ. ಇದರೊಟ್ಟಿಗೆ ರಾಜ್ಯ ಸರ್ಕಾರದಿಂದ 50 ಲಕ್ಷ ರೂ. ನೀಡುವ ಕುರಿತು ಕ್ರೀಡಾಮಂತ್ರಿ ಕೆ.ಎಸ್.ಈಶ್ವರಪ್ಪ ವಾಗ್ದಾನ ನೀಡಿದ್ದಾರೆ ಎಂದು ಅವರು ವಿವರಿಸಿದರು.</p>
<p><strong>ಉದ್ಘಾಟನೆಗೆ ಕಿರಣ್ ರಿಜಿಜು</strong></p>
<p style="text-align: justify;">ಜ.2ರಂದು ಸಂಜೆ 5.45ಕ್ಕೆ ಕ್ರೀಡಾಕೂಟದ ಉದ್ಘಾಟನೆ ನಡೆಯಲಿದ್ದು, ಭಾರತ ಸರ್ಕಾರದ ಕೇಂದ್ರ ಯುವ ಸಬಲೀಕರಣ ಮತ್ತು<img loading="lazy" decoding="async" class="size-medium wp-image-2307 alignright" src="https://alvas.org/wp-content/uploads/2019/12/Hon-MYAS-300x285.png" alt="" width="300" height="285" srcset="https://alvas.org/wp-content/uploads/2019/12/Hon-MYAS-300x285.png 300w, https://alvas.org/wp-content/uploads/2019/12/Hon-MYAS-768x730.png 768w, https://alvas.org/wp-content/uploads/2019/12/Hon-MYAS-1024x974.png 1024w" sizes="auto, (max-width: 300px) 100vw, 300px" /> ಕ್ರೀಡಾ ಸಚಿವ ಕಿರಣ್ ರಿಜಿಜು ಕೂಟವನ್ನು ಉದ್ಘಾಟಿಸಲಿದ್ದಾರೆ. ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಡಾ ಎಸ್ ಸಚ್ಚಿದಾನಂದ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕ್ರೀಡಾ ಸಚಿವ ಕೆ. ಎಸ್. ಈಶ್ವರಪ್ಪ, ಪ್ರವಾಸೋದ್ಯಮ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಚಿವ ಸಿ.ಟಿ. ರವಿ ಹಾಗೂ ಬಿಜೆಪಿ ರಾಜ್ಯಾಧ್ಯಾಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಕ್ರೀಡಾಜ್ಯೊತಿಯನ್ನು ಸ್ವೀಕರಿಸಲಿದ್ದಾರೆ. ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ ಉಮಾನಾಥ್ ಕೋಟ್ಯಾನ್ ಕ್ರೀಡಾಕೂಟದ ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ. ಅಸೊಸೀಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿಯ ಜಂಟಿ ಕಾರ್ಯದರ್ಶಿ ಡಾ ಬಲ್ಜೀತ್ ಸಿಂಗ್ ಸೋಖನ್, ಸ್ಪೋಟ್ರ್ಸ ಆಥಾರಿಟಿ ಆಫ್ ಇಂಡಿಯಾದ ಡೈರೆಕ್ಟರ್ ಜನರಲ್ ಸಂದೀಪ್ ಪ್ರಧಾನ್ ವಿಶೇಷ ಆಹ್ವೌನಿತರಾಗಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಕ್ಷೇತ್ರದ ಹಾಲಿ ಮತ್ತು ಮಾಜಿ ಸಂಸದರು, ಶಾಸಕರು ಹಾಗೂ ಪರಿಷತ್ ಸದಸ್ಯರು ಉಪಸ್ಥಿತರಿರಲಿದ್ದಾರೆ.</p>
<p style="text-align: justify;"><strong>ಸಮಾರೋಪ ಸಮಾರಂಭ</strong></p>
<p style="text-align: justify;">ಕ್ರೀಡಾಕೂಟದ ಸಮಾರೋಪ ಸಮಾರಂಭವು ಜನವರಿ 6ರಂದು ಮಧ್ಯಾಹ್ನ 3 ಗಂಟೆಗೆ ಸ್ವರಾಜ್ಯ ಮೈದಾನದಲ್ಲಿ ಜರುಗಲಿದ್ದು, ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಡಾ.ಎಸ್. ಸಚ್ಚಿದಾನಂದ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್, ಮಾಜಿ ಸಚಿವರಾದ ಅಭಯಚಂದ್ರ ಜೈನ್ ಹಾಗೂ ಅಮರ್‍ನಾಥ್ ಶೆಟ್ಟಿ, ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.</p>
<p style="text-align: justify;">ಸುದ್ದಿಗೋಷ್ಠಿಯಲ್ಲಿ ಆರ್‍ಜಿಯುಎಚ್‍ಎಸ್‍ನ ಡೆಪ್ಯುಟಿ ರಿಜಸ್ಟ್ರಾರ್ ಡಾ.ಬಿ.ವಸಂತ್ ಶೆಟ್ಟಿ, ಆರ್‍ಜಿಯುಎಚ್‍ಎಸ್‍ನ ಸಿಂಡಿಕೇಟ್ ಸದಸ್ಯ ಡಾ.ಶಿವಶರಣ್ ಶೆಟ್ಟಿ, ಆರ್‍ಜಿಯುಎಚ್‍ಎಸ್‍ನ ಸೆನೆಟ್ ಸದಸ್ಯ ಡಾ.ಶರಣ್ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್‍ಮೆಂಟ್ ಟ್ರಸ್ಟೀ ವಿವೇಕ್ ಆಳ್ವ ಉಪಸ್ಥಿತರಿದ್ದರು.</p>
<p style="text-align: justify;"><strong>ನಾಲ್ಕನೇ ಬಾರಿ ಆಳ್ವಾಸ್ ಆತಿಥ್ಯ</strong></p>
<p style="text-align: justify;">ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಸತತ ನಾಲ್ಕನೇ ಬಾರಿಗೆ ಅಖಿಲಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನ್ನು ಆಯೋಜಿಸುತ್ತಿದೆ. ಈ ಹಿಂದೆ 2013 ರಲ್ಲಿ 72ನೇ ಹಾಗೂ 75ನೇ ಕ್ರೀಡಾಕೂಟವನ್ನು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಹಾಗೂ 79ನೇ ಕ್ರೀಡಾಕೂಟವನ್ನು ಮಂಗಳೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ಆಯೋಜಿಸಿತ್ತು.</p>
<p style="text-align: justify;"><strong>ಮೊದಲ ಬಾರಿ ಮಂಗಳೂರಿನಲ್ಲಿ ಸೆನೆಟ್ ಸಭೆ</strong></p>
<p style="text-align: justify;">ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್ ಸಭೆ ಸಾಮಾನ್ಯವಾಗಿ ಬೆಂಗಳೂರಿನಲ್ಲಿ ನಡೆಯುತ್ತದೆ. ಆದರೆ, ಸೆನೆಟ್ ಸದಸ್ಯರು ಕ್ರೀಡಾಕೂಟಕ್ಕೆ ಸಾಕ್ಷಿಯಾಗಬೇಕೆಂಬ ಉದ್ದೇಶದಿಂದ ಇದೇ ಮೊದಲಬಾರಿಗೆ ಸೆನೆಟ್ ಸಭೆಯನ್ನು ಮಂಗಳೂರಿನಲ್ಲಿ ಆಯೋಜಿಸಲಾಗಿದೆ.</p>
<p style="text-align: justify;"><strong>80ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನ ವಿಶೇಷತೆಗಳು:</strong></p>
<p style="text-align: justify;">• ರಾಷ್ಟ್ರದ 400 ವಿಶ್ವವಿದ್ಯಾಲಯಗಳ ಸುಮಾರು 5 ಸಾವಿರ ಅಥ್ಲೀಟ್‍ಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ಸುಮಾರು 2000 ಕ್ರೀಡಾಧಿಕಾರಿಗಳು ಭಾಗವಹಿಸಲಿದ್ದು, ರಾಷ್ಟ್ರದ ಖ್ಯಾತ ಕ್ರೀಡಾಪಟುಗಳನ್ನು ಹಾಗೂ ತರಬೇತುದಾರರನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ.<br />
• ಮೊದಲಬಾರಿಗೆ ಆನ್‍ಲೈನ್ ನೋಂದಣಿ ಸೌಲಭ್ಯವನ್ನು ನೀಡಲಾಗಿದೆ.<br />
• ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.<br />
• ಐದು ದಿನ ಹಗಲು ಮತ್ತುರಾತ್ರಿ ಕ್ರೀಡಾಕೂಟದ ಸ್ಪರ್ಧೆಗಳು ನಡೆಯಲಿವೆ.<br />
• ವಿಶೇಷವಾಗಿ ಹೊನಲು ಬೆಳಕು ಹಾಗೂ ಅತ್ಯಾಧುನಿಕ ಫೋಟೋ ಫಿನಿಶಿಂಗ್ ತಂತ್ರಜ್ಞಾನದ ವ್ಯವಸ್ಥೆಯನ್ನು ಮಾಡಲಾಗಿದೆ.<br />
• ಪ್ರತಿದಿನ ರಾತ್ರಿ 8 ಗಂಟೆಗೆ ವಿಜಯ ವೇದಿಕೆಯಲ್ಲಿ ಪದಕ ವಿಜೇತರಿಗೆ ಸನ್ಮಾನ ನಡೆಯಲಿದೆ. ನಂತರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.<br />
• ಕ್ರೀಡಾಕೂಟದ ಪದಕ ವಿಜೇತರಿಗೆ ಹಾಗೂ ಕೂಟದಾಖಲೆ ನಿರ್ಮಿಸಿದ ಆಟಗಾರರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಗದು ಪುರಸ್ಕಾರವನ್ನು ನೀಡಲಾಗುವುದು.</p>
<p style="text-align: justify;"><strong>ಆಕರ್ಷಕ ಸಾಂಸ್ಕೃತಿಕ ಮೆರವಣಿಗೆ</strong></p>
<p style="text-align: justify;">ಕ್ರೀಡಾಕೂಟದ ಸ್ಪರ್ಧೆಗಳು ಜನವರಿ 02ರಂದು ಬೆಳಗ್ಗೆ 6.30ರಿಂದಲೇ ಆರಂಭವಾಗಲಿದ್ದು, ಅಂದು ಸಂಜೆ ಕ್ರೀಡಾಕೂಟದ ಉದ್ಘಾಟನೆ ನಡೆಯಲಿದೆ. ಅಪರಾಹ್ನ 3.30ಕ್ಕೆ ಮೂಡುಬಿದಿರೆಯ ಹನುಮಾನ್ ದೇವಸ್ಥಾನದಿಂದ ಭವ್ಯ ಮೆರವಣಿಗೆ ಹೊರಡಲಿದೆ. ನಮ್ಮ ರಾಷ್ಟ್ರದ ವಿವಿಧ ಕಲೆ-ಸಂಸ್ಕೃತಿಗಳನ್ನು ಬಿಂಬಿಸುವ 100ಕ್ಕೂ ಹೆಚ್ಚು ಕಲಾತಂಡಗಳು ಈ ಮೆರವಣಿಗೆಯಲ್ಲಿಇರಲಿವೆ. ಸಂಜೆ 5.45ಕ್ಕೆ ಪಥಸಂಚಲನದ ನಂತರ ಕ್ರೀಡಾಕೂಟದ ಉದ್ಘಾಟನೆ ನಡೆಯಲಿದೆ.</p>
<p style="text-align: justify;"><strong>ಉಚಿತ ಊಟ ಹಾಗೂ ವಸತಿ ಸೌಲಭ್ಯ</strong></p>
<p style="text-align: justify;">ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಆಗಮಿಸುವ ಎಲ್ಲಾ ಸ್ಪರ್ಧಿಗಳು, ತರಬೇತುದಾರರು, ಕ್ರೀಡಾಧಿಕಾರಿಗಳು ಹಾಗೂ ವಿಶೇಷ ಆಹ್ವಾನಿತರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಉಚಿತ ಊಟ ಹಾಗೂ ವಸತಿ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಕ್ರೀಡಾಪಟುಗಳ ಅನುಕೂಲಕ್ಕಾಗಿ ಉತ್ತರ ಹಾಗೂ ದಕ್ಷಿಣ ಭಾರತ ಎರಡೂ ಶೈಲಿಯ ಊಟದ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಕ್ರೀಡಾಕೂಟಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಸಂಸ್ಥೆ ನೀಡುತ್ತಿದೆ.</p>
<p style="text-align: justify;"><strong>ವಿಶೇಷ ಸನ್ಮಾನ</strong></p>
<p style="text-align: justify;">ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಆಳ್ವಾಸ್ ಸಂಸ್ಥೆಯ ಐವರು ಕ್ರೀಡಾಪಟುಗಳನ್ನು ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಗುವುದು. ಒಲಂಪಿಕ್ಸ್‍ನಲ್ಲಿ ಭಾರತವನ್ನು ಪ್ರತಿನಿಧಿಸಿದ ಎಂ.ಆರ್.ಪೂವಮ್ಮ, ಸತೀಶ್ ರೈ, ಅಶ್ವಿನಿ ಅಕ್ಕುಂಜಿ, ಮೋಹನ್ ಹಾಗೂ ಧಾರುಣ್ ಅಯ್ಯಸಾಮಿ ವಿಶೇಷ ಸನ್ಮಾನವನ್ನು ಸ್ವೀಕರಿಸಲಿದ್ದಾರೆ.</p>
<p>&nbsp;</p>
<p>DR.SHIVASHARAN SHETTY, SYNDICATE MEMBER, RGUHS KARNATAKA</p>
<p>DR.SHARAN SHETTY, SENATE MEMBER, RGUHS KARNATAKA</p>
<p>DR.M MOHAN ALVA, CHAIRMAN, ALVA’S EDUCATION FOUNDATION (R.)</p>
<p>DR.B VASANTH SHETTY, DEPUTY REGISTRAR, RGUHS, KARNATAKA<br />
ORGANISING SECRETARY, AIIU ATHLETIC MEET</p>
<p>MR.VIVEK M ALVA, MANAGING TRUSTEE ALVA’S EDUCATION FOUNDATION (R.)</p>The post <a href="https://alvas.org/news-events/%e0%b2%86%e0%b2%b3%e0%b3%8d%e0%b2%b5%e0%b2%be%e0%b2%b8%e0%b3%8d%e2%80%8d%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b3%80%e0%b2%af/">ಆಳ್ವಾಸ್‍ನಲ್ಲಿ ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಕೂಟ</a> first appeared on <a href="https://alvas.org">Alva's Education Trust</a>.]]></content:encoded>
					
		
		
			</item>
		<item>
		<title>ರಾಜ್ಯದ ನೆರೆ ಸಂತ್ರಸ್ತರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ 50 ಲಕ್ಷ ಪರಿಹಾರ ಘೋಷಣೆ</title>
		<link>https://alvas.org/news-events/%e0%b2%b0%e0%b2%be%e0%b2%9c%e0%b3%8d%e0%b2%af%e0%b2%a6-%e0%b2%a8%e0%b3%86%e0%b2%b0%e0%b3%86-%e0%b2%b8%e0%b2%82%e0%b2%a4%e0%b3%8d%e0%b2%b0%e0%b2%b8%e0%b3%8d%e0%b2%a4%e0%b2%b0%e0%b2%bf%e0%b2%97%e0%b3%86/</link>
		
		<dc:creator><![CDATA[alvas]]></dc:creator>
		<pubDate>Mon, 30 Sep 2019 14:47:07 +0000</pubDate>
				<category><![CDATA[News & Events]]></category>
		<category><![CDATA[Showcase]]></category>
		<guid isPermaLink="false">http://alvas.org/?p=2052</guid>

					<description><![CDATA[<p>ವಾರ್ಷಿಕ ರೂ.33.85 ಕೋಟಿ ವಾರ್ಷಿಕ ಕೊಡುಗೆಗಳ ಲೋಕಾರ್ಪಣೆ</p>
The post <a href="https://alvas.org/news-events/%e0%b2%b0%e0%b2%be%e0%b2%9c%e0%b3%8d%e0%b2%af%e0%b2%a6-%e0%b2%a8%e0%b3%86%e0%b2%b0%e0%b3%86-%e0%b2%b8%e0%b2%82%e0%b2%a4%e0%b3%8d%e0%b2%b0%e0%b2%b8%e0%b3%8d%e0%b2%a4%e0%b2%b0%e0%b2%bf%e0%b2%97%e0%b3%86/">ರಾಜ್ಯದ ನೆರೆ ಸಂತ್ರಸ್ತರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ 50 ಲಕ್ಷ ಪರಿಹಾರ ಘೋಷಣೆ</a> first appeared on <a href="https://alvas.org">Alva's Education Trust</a>.]]></description>
										<content:encoded><![CDATA[<p><img loading="lazy" decoding="async" class="aligncenter wp-image-2053 size-large" src="https://alvas.org/wp-content/uploads/2019/09/Alvas-Social-Work-2-1024x512.jpg" alt="" width="640" height="320" srcset="https://alvas.org/wp-content/uploads/2019/09/Alvas-Social-Work-2-1024x512.jpg 1024w, https://alvas.org/wp-content/uploads/2019/09/Alvas-Social-Work-2-300x150.jpg 300w, https://alvas.org/wp-content/uploads/2019/09/Alvas-Social-Work-2-768x384.jpg 768w, https://alvas.org/wp-content/uploads/2019/09/Alvas-Social-Work-2.jpg 1800w" sizes="auto, (max-width: 640px) 100vw, 640px" /></p>
<p style="text-align: justify;"><span style="font-size: large;"><b>ವಾರ್ಷಿಕ ರೂ.33.85 ಕೋಟಿ ವಾರ್ಷಿಕ ಕೊಡುಗೆಗಳ ಲೋಕಾರ್ಪಣೆ</b></span><br />
ಮೂಡುಬಿದಿರೆ : ಸಮಾಜದಿಂದ ಪಡೆದುದನ್ನು ಸಮಾಜಕ್ಕೆ ಮರುಕಳಿಸಬೇಕೆನ್ನುವ ಸಂಸ್ಥೆ ಆಳ್ವಾಸ್.  ಶಿಕ್ಷಣ, ಕ್ರೀಡೆ ಮತ್ತು ಸಾಂಸ್ಕøತಿಕವಾದ ಆಸಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿ ಸಮಾಜಕ್ಕೆ ನಿಜವಾದ ಆಸ್ತಿಗಳನ್ನಾಗಿ ರೂಪಿಸುವ ಕನಸು, ಅದಕ್ಕೆ ಪೂರಕವಾದ ಕೆಲಸವನ್ನು ಮಾಡುವ ಮೂಲಕ ರಾಜ್ಯದಲ್ಲಿ ಅತ್ಯಂತ ಅನುಕರಣೀಯ ವ್ಯಕ್ತಿ ಮೋಹನ ಆಳ್ವ ಮತ್ತು ಸಂಸ್ಥೆ ಆಳ್ವಾಸ್ ಆಗಿದ್ದು ವಾರ್ಷಿಕವಾಗಿ ರೂ. 33.85 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿಗಳು ಹಾಗೂ ಸಮಾಜದ ಸೇವೆಯನ್ನು ಮಾಡುವಂತಹ ಉತ್ತಮ ಹಾಗೂ ಅಪರೂಪದ ಕೆಲಸವನ್ನು ಮಾಡುತ್ತಿರುವ ಆಳ್ವಾಸ್‍ಗೆ ಸದಾ ಬೆಂಬಲ ನೀಡುತ್ತೇವೆ ಎಂದು ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.<br />
ಅವರು ವಿದ್ಯಾಗಿರಿಯ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ಸೋಮವಾರ ಆಯೋಜಿಸಲಾದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 50ಲಕ್ಷ ನೆರವು ಘೋಷಣೆ ಹಾಗೂ ಪ್ರತಿಷ್ಠಾನದ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಕೊಡುಗೆಗಳ ಲೋಕಾರ್ಪಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು<br />
ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಸಮಾರಂಭದಲ್ಲಿ ಆಶೀರ್ವಚನ ನೀಡಿ, ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಶಿಕ್ಷಣ ಸಂಸ್ಥೆ. ಸರ್ಕಾರಿ ಸಮ್ಮೇಳನವನ್ನೇ ಮೀರುವಂತೆ ವ್ಯವಸ್ಥಿತ ರೀತಿಯಲ್ಲಿ ಸಾಹಿತ್ಯ, ಸಾಂಸ್ಕøತಿಕ ಉತ್ಸವ ಆಯೋಜನೆ ಮಾಡುತ್ತಿರುವುದು ಮಾದರಿ ಕೆಲಸ. ಸಮಗ್ರ ಶಿಕ್ಷಣ ಪರಿಕಲ್ಪನೆಯ ಶಿಕ್ಷಣ ವ್ಯವಸ್ಥೆ ಆಳ್ವಾಸ್‍ನಲ್ಲಿ ಸಿಗುತ್ತಿರುವುದು ಕೂಡ ಶಿಕ್ಷಣ ಕ್ಷೇತ್ರದಲ್ಲಿ ಆಶಾದಾಯಕ ಬೆಳವಣಿಗೆ ಎಂದರು.<br />
ರಾಜ್ಯ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಮುಖ್ಯ ಅತಿಥಿಯಾಗಿ ಮಾತನಾಡಿ, ವ್ಯಕ್ತಿ ಹಾಗೂ ಸಂಸ್ಥೆಗಳ ಒಳ್ಳೆಯ ಗುಣಗಳ ಆಧಾರದಲ್ಲಿ ನಾವು ಗುರುತಿಸಿ ಗೌರವಿಸಬೇಕಾಗಿದೆ. ಮಾಧ್ಯಮಗಳು ಯಾವಾಗ ಸಕಾರತ್ಮಕ ಸುದ್ದಿಗಳನ್ನು ಮುಖಪುಟದಲ್ಲಿ ಲೀಡ್ ಸುದ್ದಿಯಾಗಿ, ಸುದ್ದಿವಾಹಿನಿಗಳು ಬ್ರೇಕಿಂಗ್ ನ್ಯೂಸ್ ಆಗಿ ಕೊಡುತ್ತದೋ ಅವಾಗ ಜನರು ಕೂಡ ಸಕಾರತ್ಮವಾಗಿರುತ್ತಾರೆ. ನಾಲ್ಕು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿವಿಧ ರೀತಿಯಲ್ಲಿ ಉಚಿತ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸುವುದು ಲೀಡ್ ಸುದ್ದಿಯಾಗುವಂತದ್ದು. ಮಾಧ್ಯಮ ಮಾತ್ರವಲ್ಲ ಸಮಾಜವು ಕೂಡ ಉತ್ತಮ ಕೆಲಸ ಮಾಡುವ ವ್ಯಕ್ತಿ, ಸಂಸ್ಥೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದರು.<br />
ಪೇಜಾವರಶ್ರೀ ಅವರ ನೇತೃತ್ವದ ಗೋವರ್ದನ ಗಿರಿ ಟ್ರಸ್ಟ್‍ಗೆ ಆಳ್ವಾಸ್‍ನಿಂದ ಒಂದು ಲಕ್ಷ ರೂಪಾಯಿಯ ಡಿ.ಡಿಯನ್ನು ಪೇಜಾವರಶ್ರೀಗಳಿಗೆ ಹಸ್ತಾಂತರಿಸಲಾಯಿತು.<br />
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ ವಿವಿಧ ಯೋಜನೆಗಳ ವಿವರ ನೀಡಿದರು. ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಕೆ.ಅಮರನಾಥ ಶೆಟ್ಟಿ, ಕೆ.ಅಭಯಚಂದ್ರ ಜೈನ್, ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಮುಖ್ಯ ಅತಿಥಿಯಾಗಿದ್ದರು.<br />
ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.</p>
<p>2019-20 ನೇ ಸಾಲಿನಲ್ಲಿ ವಿಧ್ಯಾರ್ಥಿಗಳಿಗೆ ಹಾಗೂ ಇತರ ಸಾಮಾಜಿಕ ಚಟುವಟಿಕೆಗಳಿಗೆ ವಿನಿಯೋಗಿಸುತ್ತಿರುವ ರೂ.33.85 ಕೋಟಿ ವಾರ್ಷಿಕ ಉಚಿತ ಕೊಡುಗೆಗಳ ವಿವರವನ್ನು ಸಮಾರಂಭದಲ್ಲಿ ಡಾ.ಎಂ ಮೋಹನ ಆಳ್ವ ಘೋಷಿಸಿದರು. ಆಳ್ವಾಸ್ ಪ್ರತಿಷ್ಠಾನದ ವಿವಿಧ ಶೈಕ್ಞಣಿಕ ಸಂಸ್ಥೆಗಳಲ್ಲಿ ಕ್ರೀಡೆ, ಶಿಕ್ಷಣ, ಸಾಂಸ್ಕøತಿಕ ಚಟುವಟಿಕೆ ವ್ಯಾಪ್ತಿಗೆ ಬರುವ 4,543 ವಿದ್ಯಾರ್ಥಿಗಳ ಉಚಿತ ಶಿಕ್ಷಣ ವ್ಯವಸ್ಥೆಗೆ ಸ್ಕೌಟ್ ಗೈಡ್ಸ್ ಕನ್ನಡ ಭವನ ನಿರ್ಮಾಣ, ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ, ಎಚ್‍ಐವಿ ಪೀಡಿತರಿಗೆ, ನುಡಿಸಿರಿ ಘಟಕ ನಿರ್ವಹಣೆ, ಕ್ರೀಡಾಕೂಟಗಳ ಆಯೋಜನೆಗೆ ಸಹಿತ ಹಲವು ಚುಟವಟಿಕೆಗಳಿಗೆ  ಒಟ್ಟು ರೂ.33.85 ಕೋಟಿ ವಾರ್ಷಿಕ ಉಚಿತ ಕೊಡುಗೆಗಳನ್ನು ಲೋಕಾರ್ಪಣೆಗೊಳಿಸಲಾಯಿತು.</p>The post <a href="https://alvas.org/news-events/%e0%b2%b0%e0%b2%be%e0%b2%9c%e0%b3%8d%e0%b2%af%e0%b2%a6-%e0%b2%a8%e0%b3%86%e0%b2%b0%e0%b3%86-%e0%b2%b8%e0%b2%82%e0%b2%a4%e0%b3%8d%e0%b2%b0%e0%b2%b8%e0%b3%8d%e0%b2%a4%e0%b2%b0%e0%b2%bf%e0%b2%97%e0%b3%86/">ರಾಜ್ಯದ ನೆರೆ ಸಂತ್ರಸ್ತರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ 50 ಲಕ್ಷ ಪರಿಹಾರ ಘೋಷಣೆ</a> first appeared on <a href="https://alvas.org">Alva's Education Trust</a>.]]></content:encoded>
					
		
		
			</item>
		<item>
		<title>ಆಳ್ವಾಸ್ ನುಡಿಸಿರಿ ವಿರಾಸತ್ ಮುಂದೂಡಿಕೆ: ಡಾ.ಎಂ ಮೋಹನ ಆಳ್ವ</title>
		<link>https://alvas.org/news-events/%e0%b2%86%e0%b2%b3%e0%b3%8d%e0%b2%b5%e0%b2%be%e0%b2%b8%e0%b3%8d-%e0%b2%a8%e0%b3%81%e0%b2%a1%e0%b2%bf%e0%b2%b8%e0%b2%bf%e0%b2%b0%e0%b2%bf-%e0%b2%b5%e0%b2%bf%e0%b2%b0%e0%b2%be%e0%b2%b8%e0%b2%a4%e0%b3%8d/</link>
		
		<dc:creator><![CDATA[alvas]]></dc:creator>
		<pubDate>Wed, 28 Aug 2019 11:38:03 +0000</pubDate>
				<category><![CDATA[News & Events]]></category>
		<category><![CDATA[Showcase]]></category>
		<guid isPermaLink="false">http://alvas.org/?p=1836</guid>

					<description><![CDATA[<p>ಮೂಡುಬಿದಿರೆ: ರಾಜ್ಯದಲ್ಲಿ ಉಂಟಾಗಿರುವ ನೆರೆಹಾವಳಿ ಹಿನ್ನೆಲೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನವೆಂಬರ್ 15ರಿಂದ 17ರವರೆಗೆ ವಿದ್ಯಾಗಿರಿಯಲ್ಲಿ ನಡೆಯಲಿದ್ದ `ಆಳ್ವಾಸ್ ನುಡಿಸಿರಿ-ವಿರಾಸತ್' ಸಮ್ಮೇಳನಗಳನ್ನು ಮುಂದೂಡಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>
The post <a href="https://alvas.org/news-events/%e0%b2%86%e0%b2%b3%e0%b3%8d%e0%b2%b5%e0%b2%be%e0%b2%b8%e0%b3%8d-%e0%b2%a8%e0%b3%81%e0%b2%a1%e0%b2%bf%e0%b2%b8%e0%b2%bf%e0%b2%b0%e0%b2%bf-%e0%b2%b5%e0%b2%bf%e0%b2%b0%e0%b2%be%e0%b2%b8%e0%b2%a4%e0%b3%8d/">ಆಳ್ವಾಸ್ ನುಡಿಸಿರಿ ವಿರಾಸತ್ ಮುಂದೂಡಿಕೆ: ಡಾ.ಎಂ ಮೋಹನ ಆಳ್ವ</a> first appeared on <a href="https://alvas.org">Alva's Education Trust</a>.]]></description>
										<content:encoded><![CDATA[<p style="text-align: justify;">ಮೂಡುಬಿದಿರೆ: ರಾಜ್ಯದಲ್ಲಿ ಉಂಟಾಗಿರುವ ನೆರೆಹಾವಳಿ ಹಿನ್ನೆಲೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನವೆಂಬರ್ 15ರಿಂದ 17ರವರೆಗೆ ವಿದ್ಯಾಗಿರಿಯಲ್ಲಿ ನಡೆಯಲಿದ್ದ `ಆಳ್ವಾಸ್ ನುಡಿಸಿರಿ-ವಿರಾಸತ್&#8217; ಸಮ್ಮೇಳನಗಳನ್ನು ಮುಂದೂಡಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.<br />
26 ವರ್ಷಗಳಿಂದ ಆಳ್ಚಾಸ್ ವಿರಾಸತ್ ಮತ್ತು 15 ವರ್ಷಗಳಿಂದ ಆಳ್ವಾಸ್ ನುಡಿಸಿರಿಯನ್ನು ಸಂಸ್ಥೆ ವತಿಯಿಂದ ಆಚರಿಸಿಕೊಂಡು ಬಂದಿರುತ್ತೇವೆ. ಈ ವರ್ಷ ಆಳ್ವಾಸ್ ನುಡಿಸಿರಿ-ವಿರಾಸತ್ ಅವಳಿ ಸಮ್ಮೇಳನಗಳನ್ನು ಜಂಟಿಯಾಗಿ ನಡೆಸಲು ನಿರ್ಧರಿಸಿದ್ದು, ಸಿದ್ಧತೆಗಳು ಕೂಡ ಆರಂಭಗೊಂಡಿದೆ. ಆದರೆ ರಾಜ್ಯದಲ್ಲಿ ಉಂಟಾದ ಭಾರಿ ನೆರೆಹಾವಳಿಯಿಂದಾಗಿ ಸಾಕಷ್ಟು ಆಸ್ತಿ ಪಾಸ್ತಿ ನಾಶವಾಗಿ ಸಾವಿರಾರು ಕುಟುಂಬಗಳ ಬದುಕು ಅತಂತ್ರ ಸ್ಥಿತಿಯಲ್ಲಿದೆ. ನಮ್ಮ ಬಂಧುಗಳು ಸಂಕಷ್ಟದ ಸ್ಥಿತಿಯಲ್ಲಿರುವಾಗ ನಾವು ಆಳ್ವಾಸ್ ನುಡಿಸಿರಿ-ವಿರಾಸತ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಭ್ರಮಿಸುವುದರಲ್ಲಿ ಅರ್ಥವಿಲ್ಲ ಎಂದು ಭಾವಿಸಿ ಈ ಎರಡೂ ಸಮ್ಮೇಳನವನ್ನು 2020ಕ್ಕೆ ಮುಂದೂಡಲಾಗಿದೆ ಹಾಗೂ ನೆರೆ ಸಂತ್ರಸ್ಥರಿಗೆ ಆರ್ಥಿಕ ಸಹಾಯ ನೀಡಿ ಅವರ ಕಷ್ಟದಲ್ಲಿ ಭಾಗಿಯಾಗಲು ನಮ್ಮ ಸಂಸ್ಥೆ ನಿರ್ಧರಿಸಿದೆ ಎಂದು ಮೋಹನ ಆಳ್ವ ತಿಳಿಸಿದರು.<br />
ಆಳ್ವಾಸ್ ನುಡಿಸಿರಿ ಸಮಿತಿಯ ಕಾರ್ಯದರ್ಶಿ ವೇಣುಗೋಪಾಲ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪಿಆರ್‍ಒ ಡಾ.ಪದ್ಮನಾಭ ಶೆಣೈ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.</p>The post <a href="https://alvas.org/news-events/%e0%b2%86%e0%b2%b3%e0%b3%8d%e0%b2%b5%e0%b2%be%e0%b2%b8%e0%b3%8d-%e0%b2%a8%e0%b3%81%e0%b2%a1%e0%b2%bf%e0%b2%b8%e0%b2%bf%e0%b2%b0%e0%b2%bf-%e0%b2%b5%e0%b2%bf%e0%b2%b0%e0%b2%be%e0%b2%b8%e0%b2%a4%e0%b3%8d/">ಆಳ್ವಾಸ್ ನುಡಿಸಿರಿ ವಿರಾಸತ್ ಮುಂದೂಡಿಕೆ: ಡಾ.ಎಂ ಮೋಹನ ಆಳ್ವ</a> first appeared on <a href="https://alvas.org">Alva's Education Trust</a>.]]></content:encoded>
					
		
		
			</item>
		<item>
		<title>ನ.14ರಿಂದ 17ರವರೆಗೆ ಆಳ್ವಾಸ್ ನುಡಿಸಿರಿ ವಿರಾಸತ್ 2019</title>
		<link>https://alvas.org/news-events/%e0%b2%a8-14%e0%b2%b0%e0%b2%bf%e0%b2%82%e0%b2%a6-17%e0%b2%b0%e0%b2%b5%e0%b2%b0%e0%b3%86%e0%b2%97%e0%b3%86-%e0%b2%86%e0%b2%b3%e0%b3%8d%e0%b2%b5%e0%b2%be%e0%b2%b8%e0%b3%8d-%e0%b2%a8%e0%b3%81%e0%b2%a1/</link>
		
		<dc:creator><![CDATA[alvas]]></dc:creator>
		<pubDate>Wed, 24 Jul 2019 13:17:53 +0000</pubDate>
				<category><![CDATA[News & Events]]></category>
		<category><![CDATA[Showcase]]></category>
		<guid isPermaLink="false">http://alvas.org/?p=1658</guid>

					<description><![CDATA[<p>ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ 25 ವರ್ಷಗಳಿಂದ ನಡೆದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ಹಾಗೂ 15 ವರ್ಷಗಳಿಂದ ನಡೆದ ಆಳ್ವಾಸ್ ನುಡಿಸಿರಿಯನ್ನು ನ.14ರಿಂದ 17ರವರೆಗೆ ಒಂದೇ ಸಮ್ಮೇಳನವಾಗಿ ಆಳ್ವಾಸ್ ನುಡಿಸಿರಿ ವಿರಾಸತ್ ಹೆಸರಿನಲ್ಲಿ ಆಚರಿಸಲಾಗುವುದು.</p>
The post <a href="https://alvas.org/news-events/%e0%b2%a8-14%e0%b2%b0%e0%b2%bf%e0%b2%82%e0%b2%a6-17%e0%b2%b0%e0%b2%b5%e0%b2%b0%e0%b3%86%e0%b2%97%e0%b3%86-%e0%b2%86%e0%b2%b3%e0%b3%8d%e0%b2%b5%e0%b2%be%e0%b2%b8%e0%b3%8d-%e0%b2%a8%e0%b3%81%e0%b2%a1/">ನ.14ರಿಂದ 17ರವರೆಗೆ ಆಳ್ವಾಸ್ ನುಡಿಸಿರಿ ವಿರಾಸತ್ 2019</a> first appeared on <a href="https://alvas.org">Alva's Education Trust</a>.]]></description>
										<content:encoded><![CDATA[<p><img loading="lazy" decoding="async" class="aligncenter wp-image-1659 size-large" src="https://alvas.org/wp-content/uploads/2019/07/Alvas-Education-Foundation-LOGO-751x1024.jpg" alt="" width="640" height="873" srcset="https://alvas.org/wp-content/uploads/2019/07/Alvas-Education-Foundation-LOGO-751x1024.jpg 751w, https://alvas.org/wp-content/uploads/2019/07/Alvas-Education-Foundation-LOGO-220x300.jpg 220w, https://alvas.org/wp-content/uploads/2019/07/Alvas-Education-Foundation-LOGO-768x1047.jpg 768w, https://alvas.org/wp-content/uploads/2019/07/Alvas-Education-Foundation-LOGO.jpg 1080w" sizes="auto, (max-width: 640px) 100vw, 640px" /></p>
<p style="text-align: justify;">ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ 25 ವರ್ಷಗಳಿಂದ ನಡೆದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ಹಾಗೂ 15 ವರ್ಷಗಳಿಂದ ನಡೆದ ಆಳ್ವಾಸ್ ನುಡಿಸಿರಿಯನ್ನು ನ.14ರಿಂದ 17ರವರೆಗೆ ಒಂದೇ ಸಮ್ಮೇಳನವಾಗಿ ಆಳ್ವಾಸ್ ನುಡಿಸಿರಿ ವಿರಾಸತ್ ಹೆಸರಿನಲ್ಲಿ ಆಚರಿಸಲಾಗುವುದು.</p>
<p style="text-align: justify;">
ಆಳ್ವಾಸ್ ನುಡಿಸಿರಿ ಸಭಾಂಗಣದ ರತ್ನಾಕರವರ್ಣಿ ವೇದಿಕೆಯಲ್ಲಿ ಹಗಲು ಹೊತ್ತಿನಲ್ಲಿ ಸಾಹಿತ್ಯಕ ಕಾರ್ಯಕ್ರಮಗಳು, ರಾತ್ರಿ ವಿವಿಧ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಆಳ್ವಾಸ್ ನುಡಿಸಿರಿ ಕಾರ್ಯಕ್ರಮ ನಡೆಯಲಿದೆ. ಆಯಾ ದಿನಗಳು ವಿದ್ಯಾಗಿರಿಯ ಆಳ್ವಾಸ್ ಪ್ಯಾಲೇಸ್ ಗ್ರೌಂಡ್‍ನಲ್ಲಿ ಆಳ್ವಾಸ್ ವಿರಾಸತ್ ಕಾರ್ಯಕ್ರಮಗಳು ಜರುಗಲಿವೆ. ವಿರಾಸತ್‍ನಲ್ಲಿ ದಿನವೊಂದಕ್ಕೆ ಎರಡು ಅವಧಿ ಶಾಸ್ತ್ರೀಯ ಸಂಗೀತ ಮತ್ತು ಶಾಸ್ತ್ರೀಯ ನೃತ್ಯಗಳ ನಡೆಯಲಿದೆ.</p>
<p style="text-align: justify;">
ನ.14ರಂದು ಆಳ್ವಾಸ್ ವಿದ್ಯಾರ್ಥಿಸಿರಿ, ಅದೇ ದಿನ ಸಾಯಂಕಾಲ ಆಳ್ವಾಸ್ ವಿರಾಸತ್ ಹಾಗೂ ಆಳ್ವಾಸ್ ಕೃಷಿಸಿರಿ&#8217; ಉದ್ಘಾಟನೆಗಳು ನಡೆಯಲಿವೆ. ನ.15ರಂದು ಆಳ್ವಾಸ್ ನುಡಿಸಿರಿ ಉದ್ಘಾಟನೆಗೊಳ್ಳಲಿದ್ದು, ನ.17ರಂದು ಮಧ್ಯಾಹ್ನ ಸಮಾರೋಪಗೊಳ್ಳಲಿದೆ. ಸಮ್ಮೇಳನದ ರೂಪುರೇಖೆಗಳ ಕುರಿತು ಚರ್ಚೆಗಳು ನಡೆಯುತ್ತಿದ್ದು ಶೀಘ್ರವಾಗಿ ಅಂತಿಮ ಸ್ಪರ್ಶ ನೀಡಲಾಗುವುದು. ಅರ್ಥವತ್ತಾಗುವಂತೆ ಹಾಗೂ ಆಕರ್ಷಕವಾಗುವಂತೆ ಸಮ್ಮೇಳನವನ್ನು ಆಯೋಜಿಸಲು ಪೂರ್ವತಯಾರಿಗಳು ಭರದಿಂದ ಸಾಗುತ್ತಿವೆ.</p>
<p style="text-align: justify;">
ಪ್ರತಿನಿಧಿಯಾಗ ಬಯಸುವವರು ರೂ.100 ಪ್ರತಿನಿಧಿ ಶುಲ್ಕದೊಂದಿಗೆ ಸದಸ್ಯರಾಗಬಹುದು.ವಿದ್ಯಾರ್ಥಿಗಳಿಗೆ ಸಮ್ಮೇಳನದಲ್ಲಿ ಉಚಿತ ಪ್ರವೇಶವಿದೆ. ನಾಡು-ನುಡಿ-ಸಂಸ್ಕೃತಿ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಆಳ್ವಾಸ್ ನುಡಿಸಿರಿ ವಿರಾಸತ್-2019&#8217;ನ್ನು ಯಶಸ್ವಿಗೊಳಿಸಬೇಕೆಂದು ಹಾಗೂ ಹೆಚ್ಚಿನ ಮಾಹಿತಿಗಾಗಿ 08258-261229 ದೂರವಾಣಿ ಮತ್ತು nudisiri@alvas.org ಈ ಮೇಲ್ ಮುಖಾಂತರ ಸಂಪರ್ಕಿಸುವಂತೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>The post <a href="https://alvas.org/news-events/%e0%b2%a8-14%e0%b2%b0%e0%b2%bf%e0%b2%82%e0%b2%a6-17%e0%b2%b0%e0%b2%b5%e0%b2%b0%e0%b3%86%e0%b2%97%e0%b3%86-%e0%b2%86%e0%b2%b3%e0%b3%8d%e0%b2%b5%e0%b2%be%e0%b2%b8%e0%b3%8d-%e0%b2%a8%e0%b3%81%e0%b2%a1/">ನ.14ರಿಂದ 17ರವರೆಗೆ ಆಳ್ವಾಸ್ ನುಡಿಸಿರಿ ವಿರಾಸತ್ 2019</a> first appeared on <a href="https://alvas.org">Alva's Education Trust</a>.]]></content:encoded>
					
		
		
			</item>
		<item>
		<title>ಯುತ್‍ಕಾನ್‍ಕ್ಲೇವ್ 2019</title>
		<link>https://alvas.org/showcase/%e0%b2%af%e0%b3%81%e0%b2%a4%e0%b3%8d%e2%80%8d%e0%b2%95%e0%b2%be%e0%b2%a8%e0%b3%8d%e2%80%8d%e0%b2%95%e0%b3%8d%e0%b2%b2%e0%b3%87%e0%b2%b5%e0%b3%8d-2019/</link>
		
		<dc:creator><![CDATA[alvas]]></dc:creator>
		<pubDate>Tue, 05 Mar 2019 09:08:32 +0000</pubDate>
				<category><![CDATA[Showcase]]></category>
		<guid isPermaLink="false">http://alvas.org/?p=1131</guid>

					<description><![CDATA[<p>ವಿದ್ಯಾಗಿರಿ: ಯಾವುದೇ ವಾಣಿಜ್ಯ ಉದ್ದಿಮೆ ಮಾಡಲುಉತ್ತಮಕೌಟುಂಬಿಕ ಹಿನ್ನಲೆ ಬೇಕಾಗಿಲ್ಲ. ತಮ್ಮ ಕೆಲಸದಕುರಿತಾದ ಸ್ಪಷ್ಟ ನಿಲುವು, ವ್ಯವಹಾರಿಕಜ್ಞಾನ</p>
The post <a href="https://alvas.org/showcase/%e0%b2%af%e0%b3%81%e0%b2%a4%e0%b3%8d%e2%80%8d%e0%b2%95%e0%b2%be%e0%b2%a8%e0%b3%8d%e2%80%8d%e0%b2%95%e0%b3%8d%e0%b2%b2%e0%b3%87%e0%b2%b5%e0%b3%8d-2019/">ಯುತ್‍ಕಾನ್‍ಕ್ಲೇವ್ 2019</a> first appeared on <a href="https://alvas.org">Alva's Education Trust</a>.]]></description>
										<content:encoded><![CDATA[<p><img loading="lazy" decoding="async" class="aligncenter size-full wp-image-1132" src="https://alvas.org/wp-content/uploads/2019/03/IMG_4853-768x512.jpg" alt="" width="768" height="512" srcset="https://alvas.org/wp-content/uploads/2019/03/IMG_4853-768x512.jpg 768w, https://alvas.org/wp-content/uploads/2019/03/IMG_4853-768x512-300x200.jpg 300w" sizes="auto, (max-width: 768px) 100vw, 768px" /></p>
<p>ವಿದ್ಯಾಗಿರಿ: ಯಾವುದೇ ವಾಣಿಜ್ಯ ಉದ್ದಿಮೆ ಮಾಡಲುಉತ್ತಮಕೌಟುಂಬಿಕ ಹಿನ್ನಲೆ ಬೇಕಾಗಿಲ್ಲ. ತಮ್ಮ ಕೆಲಸದಕುರಿತಾದ ಸ್ಪಷ್ಟ ನಿಲುವು, ವ್ಯವಹಾರಿಕಜ್ಞಾನ, ಅದಕ್ಕೆತಕ್ಕಂತ ಯೋಜನೆಗಳನ್ನು ರೂಪಿಸುವ ಸಾಮಥ್ರ್ಯಹೊಂದಿದ್ದರೆಉತ್ತಮ ವಾಣಿಜ್ಯಉದ್ದಿಮೆದಾದರನಾಗಹುದುಎಂದುಎನ್ವಿಗರೀನ್ ಬೈಯೋಟೆಕ್ ಪ್ರೈ. ಲಿ ನ ಸಿ.ಇ.ಒ ಅಶ್ವತ್ ಹೆಗ್ಡೆ ಹೇಳಿದರು.</p>
<p>ಇವರು ಆಳ್ವಾಸ್ ಕಾಲೇಜು ಹಾಗೂ ಪುತ್ತೂರಿನಆಕಾಂಕ್ಷಚಾರಿಟೇಬಲ್ ಟ್ರಸ್ಟ್‍ನಜಂಟಿ ಸಹಯೋಗದಲ್ಲಿ ನಡೆದ `ಯುತ್‍ಕಾನ್‍ಕ್ಲೇವ್ 2019’ ನ್ನು ಉದ್ಘಾಟಿಸಿ ಮಾತನಾಡಿದರು.</p>
<p>ವಾಣಿಜ್ಯಉದ್ದಿಮೆದಾರನಾಗುವುದು ಸಾಮಾನ್ಯ ಕೆಲಸವಲ್ಲ, ಪ್ರತಿಯೊಬ್ಬಉದ್ಯಮಿಯುತನ್ನ ಭವಿಷ್ಯದಕುರಿತು ಸ್ಪಷ್ಟಚಿತ್ರಣ ಹೊಂದಿರಬೇಕು.ಅದಕ್ಕಾಗಿ ಸರಿಯಾದ ಪೂರ್ವ ತಯಾರಿಗಳನ್ನು ಮಾಡಿಕೊಳ್ಳಬೇಕು.ತನ್ನಉದ್ಯಮದ ಸಾಧಕ ಬಾಧಕಗಳನ್ನು ಸರಿಯಾಗಿ ಯೋಚಿಸಿ ಹೆಜ್ಜೆಇಡುವುದು ಸೂಕ್ತ. ಆಗ ಯಶಸ್ಸು ವ್ಯಕ್ತಿಯನ್ನು ಹಿಂಬಾಲಿಸುವುದುಎಂದರು.</p>
<p>ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದಡಾ.ಕುರಿಯನ್ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯುತನ್ನಚೌಕಟ್ಟಿನಿಂದ ಹೊರಬಂದುಚಿಂತಿಸಬೇಕು.ಯಾವುದೇ ವಿಷಯವನ್ನು ವ್ಯಕ್ತಪಡಿಸುವಾಗ ಮುಕ್ತ ಮನಸ್ಸಿನಿಂದ ಹಂಚಿಕೊಳ್ಳಬೇಕು. ಮಾತ್ರವಲ್ಲಯಾವುದೇ ಪ್ರತಿಫಲಾಆಪೇಕ್ಷೆಯಿಲ್ಲದೇ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಆಗ ಮಾತ್ರ ಜಯಗಳಿಸಲು ಸಾಧ್ಯಎಂದರು.</p>
<p>ಸಂಪನ್ಮೂಲ ವ್ಯಕ್ತಿಗಳಾಗಿ ಯುವವಿಜ್ಞಾನಿ ಪ್ರತಾಪ್‍ಎನ್. ಎಮ್, ರಾಷ್ಟ್ರೀಯ ಪ್ರಶಸ್ತಿ ಪುರಸ್ಕøತ ಸ್ವಸ್ತಿಕ್ ಪದ್ಮ, ಹಾಗೂ `ಹಳ್ಳಿ ಮನೆ ರೊಟ್ಟಿ’ ಯ ಸಂಸ್ಥಾಪಕಿ ಶಿಲ್ಪಾ ಆಗಮಿಸಿದ್ದರು.</p>
<p>ಕಾರ್ಯಕ್ರಮದಲ್ಲಿಆಕಾಂಕ್ಷಚಾರಿಟೇಬಲ್ ಟ್ರಸ್ಟ್‍ನ ಮ್ಯಾನೇಜಿಂಗ್‍ಡೈರೆಕ್ಟರ್ ಶ್ರೀಶಾ ಭಟ್ ಉಪಸ್ಥಿತರಿದ್ದರು.ಆಕಾಂಕ್ಷಚಾರಿಟೇಬಲ್ ಟ್ರಸ್ಟ್‍ನ ಸದಸ್ಯೆಯಾದ ಸುಕ್ಷಿತಾಕಾರ್ಯಕ್ರಮ ನಿರೂಪಿಸಿದರು.</p>The post <a href="https://alvas.org/showcase/%e0%b2%af%e0%b3%81%e0%b2%a4%e0%b3%8d%e2%80%8d%e0%b2%95%e0%b2%be%e0%b2%a8%e0%b3%8d%e2%80%8d%e0%b2%95%e0%b3%8d%e0%b2%b2%e0%b3%87%e0%b2%b5%e0%b3%8d-2019/">ಯುತ್‍ಕಾನ್‍ಕ್ಲೇವ್ 2019</a> first appeared on <a href="https://alvas.org">Alva's Education Trust</a>.]]></content:encoded>
					
		
		
			</item>
	</channel>
</rss>
